‘ಮಗುವಿನ ಮೂಗಿನಲ್ಲಿ ದುರ್ಮಾಂಸ ಬೆಳೆದಿತ್ತು. ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಆಸ್ಪತ್ರೆಯ ವೈದ್ಯರು 15 ದಿನಗಳ ಹಿಂದೆಯೇ ಸೂಚಿಸಿದ್ದರು. ಅಕುಲ್ಗೆ ರಜೆ ಇದ್ದ ಕಾರಣ ಶುಕ್ರವಾರ ಆಸ್ಪತ್ರೆಗೆ ದಾಖಲಿಸಿದ್ದೆವು. ಬೆಳಿಗ್ಗೆ 10.30ಕ್ಕೆ ಶಸ್ತ್ರಚಿಕಿತ್ಸೆ ಆರಂಭವಾಯಿತು. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದಷ್ಟೇ ವೈದ್ಯರು ಹೇಳಿದರು. ಆದರೆ ಮಧ್ಯಾಹ್ನ 3.30ಕ್ಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಅರಿವಳಿಕೆ ಮದ್ದು ಹೆಚ್ಚಾಗಿದ್ದರಿಂದ ಅಕುಲ್ ಮೃತಪಟ್ಟಿದ್ದಾನೆ’ ಎಂದು ಚಿಕ್ಕೇಗೌಡ ಆರೋಪಿಸಿದ್ದಾರೆ.