ಇದು ಹಾವೇರಿ ತಾಲ್ಲೂಕಿನ ಕೋಡಬಾಳ ಗ್ರಾಮದ ಚರಂತಿಮಠ ಕುಟುಂಬದ ಕಣ್ಣೀರ ಕತೆ.ಆಗಸ್ಟ್ ಮತ್ತು ಅಕ್ಟೋಬರ್ನಲ್ಲಿ ಅಬ್ಬರಿಸಿದ ಮಳೆಗೆ ಅವರ ಮನೆ ಸಂಪೂರ್ಣ ನೆಲಸಮವಾಯಿತು. ಕುಟುಂಬದ ಆಧಾರವಾಗಿರುವ ಶೈಲಾ ಚರಂತಿಮಠ ಅವರು ಬುದ್ಧಿಮಾಂದ್ಯ ಪತಿ, ಮಗ– ಮಗಳನ್ನು ಹಾಗೂ ಕಣ್ಣು ಕಾಣಿಸದ ಅಜ್ಜಿಯನ್ನು ಕರೆದುಕೊಂಡು ಅಂಗನವಾಡಿ ಸೇರಿದರು. ಜಿಲ್ಲಾಡಳಿತ ಅದನ್ನೇ ಕಾಳಜಿ ಕೇಂದ್ರವನ್ನಾಗಿ ಮಾಡಿ, ಆಸರೆಯ ವ್ಯವಸ್ಥೆ ಮಾಡಿಕೊಟ್ಟಿತು.