ಕುಮಟಾ–ಸಿದ್ದಾಪುರ ರಸ್ತೆಯ ಸಂತೆಗುಳಿ ಬಳಿ ಅಘನಾಶಿನಿ ನದಿಗೆ ಸುಮಾರು 12ವರ್ಷಗಳ ಹಿಂದೆ ತೂಗುಸೇತುವೆ ನಿರ್ಮಿಸಲಾಗಿತ್ತು. ಇದರಿಂದ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಡಗಿ, ಕಲವೆ, ಬಂಗಣೆ, ಮೊರಸೆ ಮುಂತಾದ ಗ್ರಾಮಗಳಿಗೆ ಸಂಪರ್ಕ ಏರ್ಪಟ್ಟಿತ್ತು. ಈಚೆಗೆಅಘನಾಶಿನಿಉಕ್ಕಿ ಹರಿದು ಬಂದ ನೆರೆಯಲ್ಲಿತೂಗು ಸೇತುವೆ ಕೊಚ್ಚಿ ಹೋಯಿತು. ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದರೂನಾಲ್ಕೂ ಗ್ರಾಮಗಳ ಜನರು ಶ್ರಮದಾನ ಮಾಡಿ ಸಾಧ್ಯವಾದ ಮಟ್ಟಿಗೆ ಪರಿಹಾರ ಕಂಡುಕೊಂಡರು.