ತಿಂಗಳ ಹಿಂದೆ ಚೌಡಹಳ್ಳಿ ಗ್ರಾಮದಲ್ಲಿ ರೈತರೊಬ್ಬರನ್ನು ಹುಲಿ ಕೊಂದಿತ್ತು. ಅಂದಿನಿಂದ ಹುಂಡಿಪುರ, ಮೇಲುಕಾಮನಹಳ್ಳಿ, ಮಂಗಲ, ಚೌಡಹಳ್ಳಿ, ಶಿವಪುರ ಭಾಗದಲ್ಲಿ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಲೇ ಇದೆ. ಹುಲಿಯನ್ನು ಸೆರೆ ಹಿಡಿಯುವುದಕ್ಕಾಗಿ ಅದು ಕಂಡು ಬಂದ ಜಾಗಗಳಲ್ಲಿ ಸಿಬ್ಬಂದಿ ಬೋನನ್ನೂ ಇರಿಸಿದ್ದಾರೆ. ಆದರೆ, ಈ ವರೆಗೆ ಸೆರೆ ಸಾಧ್ಯವಾಗಿಲ್ಲ.