ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್, ಚಿರತೆಗೆ ‘ಡಾರ್ಟ್’ ಮೂಲಕ ಅರಿವಳಿಕೆ ನೀಡಿದರು. ಆದರೆ, ಅದನ್ನು ನೋಡಲು ಸುತ್ತುವರಿದಿದ್ದ ಜನರು ಅರಿವಳಿಕೆಯ ಪರಿಣಾಮ ಉಂಟಾಗುವ ಮೊದಲೇ ಚಿರತೆಯ ಸಮೀಪಕ್ಕೆ ಹೋಗಿದ್ದರಿಂದ ಅದು ಗಾಬರಿಗೊಂಡಿತ್ತು. ಇದರಿಂದಾಗಿ, ಕಾರ್ಯಾಚರಣೆಯಲ್ಲಿದ್ದ ಅರಣ್ಯ ಇಲಾಖೆಯ ಜೀಪ್ ಚಾಲಕ ಶೇಷು ಎನ್ನುವವರ ಮೇಲೆ ಅದು ದಾಳಿ ಮಾಡಿದೆ. ನಂತರ ಸ್ಥಳದಿಂದ ಪರಾರಿಯಾಗಿದೆ.