ಮಡಿಕೇರಿ: ಹೊರವಲಯದ ತಾಜ್ ರೆಸಾರ್ಟ್ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬಸ್ಥರೊಂದಿಗೆ ವಾಸ್ತವ್ಯ ಮಾಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಆಗಮಿಸಿದ ಕುಮಾರಸ್ವಾಮಿ ಅವರು ಭಾನುವಾರದವರೆಗೂ ರೆಸಾರ್ಟ್ನಲ್ಲೇ ತಂಗಲಿದ್ದಾರೆ. ಅವರೊಂದಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಹಾಗೂ ಸಹೋದರಿಯರು ಸೇರಿದಂತೆ ಕುಟುಂಬದ ಹತ್ತು ಮಂದಿ ರೆಸಾರ್ಟ್ನಲ್ಲಿದ್ದಾರೆ. ಇದು ಖಾಸಗಿ ಭೇಟಿ ಎಂದು ಮೂಲಗಳು ತಿಳಿಸಿವೆ.
2018ರ ನೆರೆ ಸಂತ್ರಸ್ತರಿಗೆ ಕಳೆದ ವಾರ ಹಸ್ತಾಂತರ ಮಾಡಿರುವ ಮನೆಗಳನ್ನು ಭಾನುವಾರ ಮಧ್ಯಾಹ್ನ ಕುಮಾರಸ್ವಾಮಿ ಅವರು ವೀಕ್ಷಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.