ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ ಅವರು, ‘ನನಗೆ ಜನವರಿ 4ರಂದು ಶಿರಸಿಗೆ ವರ್ಗಾವಣೆಯಾಗಿತ್ತು. ಹಾಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರರು ಕೆ.ಎ.ಟಿ.ಯಿಂದ ತಡೆಯಾಜ್ಞೆ ತಂದಿದ್ದರು. ಅಲ್ಲಿ ವಿಚಾರಣೆ ನಡೆದು, ನನ್ನ ಪರವಾಗಿ ಆದೇಶವಾಗಿದೆ. ಸಿದ್ದಾಪುರಕ್ಕೆ ಮರುಆದೇಶವಾದರೂ, ಮೊದಲಿನ ಆದೇಶವೇ ಪುರಸ್ಕೃತವಾಗುತ್ತದೆ’ ಎಂದರು.