‘ಕೆಲವು ಸ್ನೇಹಿತರು ಸೇರಿ ‘ಗೋಕಾಕ ನೆರೆ ಪರಿಹಾರ ತಂಡ’ದಲ್ಲಿ ಮಾಡಿಕೊಂಡಿದ್ದೇವೆ. ವಿವಿಧ ವೃತ್ತಿ ಮಾಡುತ್ತಿರುವವರು ಇದರಲ್ಲಿದ್ದೇವೆ. ₹ 1 ಲಕ್ಷಕ್ಕೂ ಹೆಚ್ಚಿನ ಹಣ ಸಂಗ್ರಹಿಸಿ ಕೆಲವರಿಗೆ ಅಗತ್ಯ ವಸ್ತುಗಳನ್ನು ಕೊಡಿಸಿದ್ದೇವೆ. 6 ಶಾಲೆಗಳ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ನೀಡಿದ್ದೇವೆ. ಖರ್ಚು ವೆಚ್ಚದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದೇವೆ. ಇದರಿಂದ, ದೇಣಿಗೆ ನೀಡಿದವರಿಗೂ ವಿಷಯ ತಿಳಿಯುತ್ತದೆ. ವೈಯಕ್ತಿಕವಾಗಿ ಏನಾದರೂ ಮಾಡಬೇಕು ಎಂದು ಮನಸ್ಸಾಯಿತು. ಹೀಗಾಗಿ, ನನ್ನ ವಿದ್ಯೆ ಆಧರಿಸಿದ ಕೆಲಸವನ್ನು ಉಚಿತವಾಗಿ ಮಾಡಿಕೊಡುತ್ತಿದ್ದೇನೆ. ನಿಜವಾಗಿಯೂ ಸಂತ್ರಸ್ತರಾದವರಿಗೆ ಸಹಾಯ ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು.