ಕೊಟ್ಟೂರು: ನೂತನ ಕೊಟ್ಟೂರು ತಾಲ್ಲೂಕಿಗೆ ಹಗರಿಗಜಾಪುರ ಗ್ರಾಮವನ್ನು ಸೇರ್ಪಡೆಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
‘ಗ್ರಾಮದಿಂದ ಕೊಟ್ಟೂರಿಗೆ ಕೇವಲ ಐದು ಕಿಮೀ ಸಮೀಪವಾಗುತ್ತದೆ. ಆದರೆ, ಗ್ರಾಮದಿಂದ ಹರಪನಹಳ್ಳಿ ತಾಲ್ಲೂಕಿಗೆ ಹೋಗಲು 25 ಕಿ.ಮೀಯಷ್ಟು ದೂರವಾಗುತ್ತದೆ. ಅಲ್ಲದೇ, ವ್ಯವಹಾರಿಕ, ಧಾರ್ಮಿಕ, ಶೈಕ್ಷಣಿಕವಾಗಿ ಗ್ರಾಮವು ಕೊಟ್ಟೂರನ್ನು ಅವಲಂಬಿಸಿದೆ. ಈ ಕುರಿತು ಹಿಂದೆ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿವರೆಗೂ ಪ್ರಯೋಜವಾಗಿಲ್ಲ. ಒಂದು ವೇಳೆ ಬೆೇಡಿಕೆ ಈಡೇರದಿದ್ದರೆ ಪ್ರತಿಭಟನೆ ಸತ್ಯಾಗ್ರಹವನ್ನು ಮಾಡಲಾಗುವುದು’ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮಸ್ಥರಾದ ಎಸ್.ಎಂ. ಶಿವಮೂರ್ತಯ್ಯ, ಬಿ. ಬರಮನಗೌಡ, ಎಸ್.ಎಂ. ಚಂದ್ರಶೇಖರಯ್ಯ, ಎಸ್.ಎಂ. ಕೊಟ್ರಯ್ಯ, ಜೆ. ಮಲ್ಲೇಶ, ಕೆ. ಸತೀಶ, ಎಸ್. ವಿಜಯಕುಮಾರ, ಗ್ರಾಮ ಪಂಚಾಯ್ತಿ ಸದಸ್ಯ ಜಿ.ಪಿ. ವಿರುಪಾಕ್ಷಿಗೌಡ ಇದ್ದರು.