ಬುಧವಾರ ಇಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಎರಡು ರೀತಿಯಲ್ಲಿ ಹಬ್ಬಿತ್ತು. ಒಂದು ಗಾಂಧೀಜಿ ನೇತೃತ್ವದ ಅಹಿಂಸಾತ್ಮಕ ಹೋರಾಟ, ಇನ್ನೊಂದು ವೀರ ಸಾವರ್ಕರ್, ಭಗತ್ ಸಿಂಗ್ರಂತಹ ಕ್ರಾಂತಿವೀರರ ಹೋರಾಟ. ಸ್ವಾತಂತ್ರ್ಯ ಸಿಗುವ ವಿಚಾರ ಮನದಟ್ಟು ಮಾಡಿಕೊಂಡ ಗಾಂಧೀಜಿ, ಸ್ವಾತಂತ್ರ್ಯೋತ್ತರ ಭಾರತದ ಚಿಂತನೆ ಹೇಗಿರಬೇಕು ಎಂಬ ಬಗ್ಗೆ ಅದ್ಭುತ ವ್ಯಾಖ್ಯಾನ ನೀಡಿ, ಭಾರತ ರಾಮ ರಾಜ್ಯವಾಗಬೇಕು ಎಂದಿದ್ದರು’ ಎಂದರು.