ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಮಾತನಾಡಿ, ‘ಶಿಕ್ಷಣ ಎಂಬುದು ಸಾಧನೆ ಮತ್ತು ಸಾಧನ ಎಂದು ಗಾಂಧೀಜಿ ಹೇಳುತ್ತಿದ್ದರು. ಆದರೆ, ಇಂದಿನ ಶಿಕ್ಷಣ ಹೊಟ್ಟೆ ಬಟ್ಟೆಗೆ ಸೀಮಿತವಾಗಿದೆ. ಗಾಂಧೀಜಿ ಬದುಕಿನ ಕುರಿತು 100 ಸಂಪುಟಗಳಿವೆ. ಅದರಲ್ಲಿಒಂದು ಸಂಪುಟವನ್ನಾದರೂ ಓದುವ ಪ್ರಯತ್ನವನ್ನು ನಾವೆಲ್ಲರೂಮಾಡುತ್ತಿಲ್ಲ. ಉತ್ತಮ ಜೀವನ ರೂಪಿಸಿಕೊಳ್ಳಲು ಇಂತವರ ಜೀವನವನ್ನು ಓದಬೇಕು. ಗಾಂಧೀಜಿ ಅವರ ಒಂದೆರಡು ಸಂದೇಶಗಳನ್ನು ನಾವು ಅಳವಡಿಸಿಕೊಂಡರೆ ಸಾರ್ಥಕ ಬದುಕು ನಡೆಸಬಹುದು’ ಎಂದು ಹೇಳಿದರು.