ನಂತರ ಮಾತನಾಡಿದಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ‘ಆರ್ಎಸ್ಎಸ್ನವರು ಗಾಂಧೀಜಿ ವಿರುದ್ಧವಾಗಿದ್ದರು. ಈಗ ಅವರ ಚಿತ್ತ ಮುಸ್ಲಿಮರತ್ತ ತಿರುಗಿದ್ದು, ಅದಕ್ಕಾಗಿಯೇ ಸಿಎಎನಂತಹ ಕಾನೂನು ತರಲಾಗಿದೆ. ಆರ್ಎಸ್ಎಸ್, ವಿಶ್ವಹಿಂದೂ ಪರಿಷತ್, ಬಜರಂಗದಳ, ಎನ್ಆರ್ಸಿ ಬಗ್ಗೆ ಮಾತನಾಡಿದರೆ ದೇಶದ್ರೋಹಿಗಳು ಎಂಬ ಪಟ್ಟ ಕಟ್ಟಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ದೇಶ ವಿಭಜನೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.