ಅನಂತಕುಮಾರ ಹೆಗಡೆ ಫೇಸ್ಬುಕ್ ಪುಟದಲ್ಲಿ...
’ನಮ್ಮ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯ ಸಮಸ್ತ ಪ್ರಜೆಗಳಿಗೆ ಮುಖ್ಯಮಂತ್ರಿಯೋ ಅಥವಾ ಕೇವಲ ಒಂದು ಕೋಮಿಗೆ ಮಾತ್ರ ಮುಖ್ಯಮಂತ್ರಿಯೋ? ಕೋಮು ಗಲಭೆಯಲ್ಲಿ ಪಾಲ್ಗೊಂಡ ಮುಗ್ಧ ಅಲ್ಪಸಂಖ್ಯಾತರನ್ನು ಮಾತ್ರ ಗಲಭೆ ಪ್ರಕರಣದಿಂದ ಮುಕ್ತಗೊಳಿಸುವುದರ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ, ಇತ್ತೀಚಿಗೆ ಮುಖ್ಯ ಮಂತ್ರಿಗಳು ಛೂ ಬಿಟ್ಟಿದ್ದಾರೆ. ಸಂಪೂರ್ಣ ಐದು ವರ್ಷ ಅವಧಿಯಲ್ಲಿ, ಅವರು ಒಂದು ಕೋಮಿನ ಹಿತೈಷಿಗಳಂತೆ ವರ್ತಿಸುತ್ತಿರುವುದು ಇದೇನು ಮೊದಲಲ್ಲ, ಮತ್ತು, ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯ ಪುನರಾವರ್ತನೆಯಾಗುತ್ತಿದೆ! ಇನ್ನು ಈ ಮುಖ್ಯಮಂತ್ರಿಗಳು ಬಹಿರಂಗವಾಗಿ ಮತ್ತು ಮಾಧ್ಯಮದ ಮೂಲಕ ಸಂವಿಧಾನದ ಬಗ್ಗೆ ದಿನ ನನಗೆ ಪಾಠ ಮಾಡುತಿರುತ್ತಾರೆ.’