ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಡ್ರಗ್ಸ್ ಮಾಫಿಯಾಕ್ಕೆ ಜನೌಷಧಿ ತಡೆ'

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ– ಮಾಹಿತಿ ಕಾರ್ಯಾಗಾರ
Last Updated 19 ಮೇ 2018, 6:33 IST
ಅಕ್ಷರ ಗಾತ್ರ

ಪುತ್ತೂರು: ‘ಪ್ರಧಾನ ಮಂತ್ರಿ ಜನೌಷಧ ಕೇಂದ್ರವು ದೇಶದಾದ್ಯಂತ ಪ್ರಾರಂಭಗೊಂಡ ಬಳಿಕ ಡ್ರಗ್ಸ್‌ ಮಾಫಿಯಾಕ್ಕೆ ನಿಯಂತ್ರಣ ಬಿದ್ದಿದೆ’ ಎಂದು ರೆಡ್‌ಕ್ರಾಸ್‌ ಸಂಸ್ಥೆಯ ಕರ್ನಾಟಕ ಘಟಕದ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ  ಹೇಳಿದರು.

ನೆಹರೂ ನಗರದಲ್ಲಿರುವ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಕುರಿತಾದ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿಯ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಯುವ ರೆಡ್ ಕ್ರಾಸ್ ಘಟಕ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಮತ್ತು ಭಾರತೀಯ ರೆಡ್‌ ಕ್ರಾಸ್ ಪುತ್ತೂರು ಘಟಕದ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಪುತ್ತೂರಿನ ಆದರ್ಶ ಆಸ್ಪತ್ರೆಯ ವೈದ್ಯ ಡಾ. ಶ್ಯಾಮ್ ಅವರು ಮಾತನಾಡಿ, ‘ಬಸ್ ನಿಲ್ದಾಣದ ಬಳಿಯಿರುವ ಡಾ.ಶಿವರಾಮ ಭಟ್ ಅವರ ಕ್ಲಿನಿಕ್‌ನಲಿ ಕಳೆದ 63 ವರ್ಷಗಳಿಂದ ಜನರಿಕ್(ಜನೌಷಧಿ) ಔಷಧಿಯನ್ನೇ ವಿತರಿಸಲಾಗುತ್ತಿದೆ. ಔಷಧಿಯ ಗುಣಮಟ್ಟ ಉತ್ತಮವಾಗಿದ್ದು ರೋಗಿಗಳಿಗೆ ಪ್ರತಿಕೂಲ ಪರಿಣಾಮ ಬೀರಿದೆ. ಔಷಧಿಯಲ್ಲಿ ಯಾವುದೇ ದೂರುಗಳು ಬಂದಿಲ್ಲ’ ಎಂದರು.

ವಿವೇಕಾನಂದ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಉಪಾಧ್ಯಕ್ಷೆ ಡಾ.ಸುಧಾ ಎಸ್.ರಾವ್ ಅವರು ಅಧ್ಯಕ್ಷತೆ ವಹಿಸಿ, ‘ಜನೌಷಧ ಕೇಂದ್ರವು ಒಂದು ಯಶಸ್ವಿ ಯೋಜನೆಯಾಗಿದೆ. ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಯೋಜನೆಯ ಪ್ರಯೋಜನವನ್ನು ವೈದ್ಯರುಗಳು ಜನರಿಗೆ ತಲುಪಿಸುವಂತಾದರೆ  ಇನ್ನಷ್ಟು ಯಶಸ್ವಿಯಾಗಲು ಸಾಧ್ಯ’ ಎಂದರು.

‌ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ವಾಮನ ಪೈ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ  ಮಾತನಾಡಿದರು

ಸಂಪನ್ಮೂಲ ವ್ಯಕ್ತಿಯಾಗಿ ಡಾ.ಅನಿಲಾ ಅವರು ಕಾರ್ಯಾಗಾರ ನಡೆಸಿಕೊಟ್ಟರು. ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ಘಟಕದ ಸಭಾಪತಿ ಆಸ್ಕರ್ ಆನಂದ್, ಕಾರ್ಯದರ್ಶಿ ಎ.ಜೆ. ರೈ ಇದ್ದರು.

ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಎನ್. ಭಟ್ ಅವರು ಸ್ವಾಗತಿಸಿದರು. ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ರವಿನಾರಾಯಣ ನಿರೂಪಿಸಿದರು. ಉಪನ್ಯಾಸಕರಾದ ಪುಷ್ಪಾ, ಹರಿಕೃಷ್ಣ, ಹರೀಶ್ ಭಟ್, ಚಂದ್ರಕುಮಾರ್, ಮುರಳೀಧರ, ರೋಹಿತ್, ಸುಧಾ, ಪ್ರಮೋದ್ ಎಂ.ಎಸ್ ಸಹಕರಿಸಿದರು.

‘ಜನೌಷಧ ಕೇಂದ್ರ– ಅವಕಾಶ’

‘ಜನೌಷಧ ಕೇಂದ್ರ ಪ್ರಾರಂಭಿಸಲು ಪೀಠೋಪಕರಣಗಳಿಗೆ ₹1ಲಕ್ಷ, ಔಷಧಿಗಳ ಖರೀದಿಗೆ ₹1ಲಕ್ಷ ಹಾಗೂ ₹50ಸಾವಿರ ಇತರ ಸಾಮಗ್ರಿಗಳ ಖರೀದಿ ಸೇರಿದಂತೆ ಒಟ್ಟು ₹2.50ಲಕ್ಷಗಳ ಅನದಾನ ನೀಡಲಾಗುತ್ತದೆ. ಔಷಧಿಗಳ ಸರಬರಾಜಿನಲ್ಲಿ ಕೆಲವೊಂದು ತೊಂದರೆಗಳನ್ನು ಎದುರಿಸುತ್ತಿದ್ದು , ಇದಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಔಷಧಿಗಳ ಸರಬರಾಜಿಗೆ ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಜನೌಷಧಿ ಬೆಲೆ ಅಗ್ಗ’

‘ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನೌಷಧ ಕೇಂದ್ರದ ಮೂಲಕ ರೋಗಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಯನ್ನು ವಿತರಿಸಲಾಗುತ್ತಿದೆ. ಬಡವರಿಗೆ ಅರಿವು ಮೂಡಿಸಲು ಯುವ ಜನತೆ ಮುಂದಾಗಬೇಕು. ಜನೌಷಧ ಕೇಂದ್ರದಲ್ಲಿ ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದ ಔಷಧಿ ಸೇರಿದಂತೆ ಸುಮಾರು 685 ಬಗೆಯ ಔಷಧಿಗಳು ದೊರೆಯುತ್ತದೆ. ಡಯಾಬಿಟಿಸ್ ಹಾಗೂ ಅಧಿಕರಕ್ತ ಒತ್ತಡದ ಕಾಯಿಲೆಯಿರುವ ರೋಗಿಗಳಿಗೆ ಒಂದು ತಿಂಗಳ ಅವಧಿಯ ಔಷಧಿಗೆ ಮಾರುಕಟ್ಟೆಯಲ್ಲಿ ₹1000 ಖರ್ಚು ತಗುಲಿದರೆ, ಜನೌಷಧ ಕೇಂದ್ರದಲ್ಲಿ ₹378 ಖರ್ಚಾಗಬಹುದು ಅಷ್ಟೆ’ ಎಂದರು.

**
ಕೆಲವೊಂದು ಔಷಧಿಗಳಿಗೆ ಬಾರಿ ಬೇಡಿಕೆಯಿದ್ದು, ಬೇಡಿಯುಳ್ಳ ಔಷಧಿಗಳನ್ನು ನೂರುಪಟ್ಟು ಅಧಿಕ ದರದಲ್ಲಿ ಮಾರಾಟ ಮಾಡುವ ದೊಡ್ಡ ಮಾಫಿಯಾವೇ ದೇಶದಲ್ಲಿ ನಡೆಯುತ್ತಿತ್ತು
- ಬಸ್ರೂರು ರಾಜೀವ್ ಶೆಟ್ಟಿ, ಅಧ್ಯಕ್ಷ, ರಾಜ್ಯರೆಡ್‌ಕ್ರಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT