‘ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕಾದ ರೈತ ಸಂಪರ್ಕ ಕೇಂದ್ರ, ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತ ಸಂಪರ್ಕ ಕೇಂದ್ದರ ವ್ಯಾಪ್ತಿಯ ಗಂಗನಬೀಡ್, ದಾಬಕಾ, ಅಕನಾಪುರ್, ಮುತ್ತಖೇಡ್, ಚೊಂಡಿಮುಖೇಡ್ ಗ್ರಾಮಗಳ ರೈತರಿಗೆ ಕಳೆದ ಐದಾರು ದಿನಗಳಿಂದ ಬೀಜ ವಿತರಣೆಯಾಗಿಲ್ಲ. ಇದರಿಂದ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಕೂಡಲೇ ರೈತರಿಗೆ ರಿಯಾಯಿತಿ ದರದಲ್ಲಿ ಬೀಜಗಳನ್ನು ಸಮರ್ಪಕವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ರೈತರು ಒತ್ತಾಯಿಸಿದರು.