ರಸ್ತೆ ಸಾರಿಗೆ ಸಂಸ್ಥೆಯ ಘಟಕದ ಎದುರು ಇರುವರಾಜೇಂದ್ರ ಶಿರಶ್ಯಾಡ ಎಂಬುವವರ ಮನೆಯೇ ದರೋಡೆಗೆ ಒಳಗಾಗಿದೆ. ರಾತ್ರಿ 1ರ ಸುಮಾರಿಗೆ ಮುಸುಕು ಧರಿಸಿ ಬಂದ ಐವರು, ಏಕಾಏಕಿ ಮನೆಯ ಬಾಗಿಲು ಮುರಿದು ಒಳನುಗ್ಗಿದರು. ಚಾಕು, ಚೂರಿ, ಬಡಿಗೆ ತೋರಿಸಿ ಮನೆಯವರನ್ನು ಬೆದರಿಸಿದರು. ಪರಸ್ಪರ ಹಿಂದಿಯಲ್ಲಿ ಮಾತನಾಡುತ್ತಿದ್ದ ಅವರು, ದರೋಡೆಗೆ ಮುಂದಾದಾಗ ದಂಪತಿ ಪ್ರತಿರೋಧ ತೋರಿದರು. ಆಗ ರಾಜೇಂದ್ರ, ಅವರ ಪತ್ನಿ ರಾಜೇಶ್ವರಿ, ಪುತ್ರರಾದ ಪ್ರಜ್ವಲ್, ಪ್ರಫುಲ್ ಅವರ ಕೈ ಕಾಲು ಕಟ್ಟಿಹಾಕಿ, ಥಳಿಸಿದರು. ನಂತರ ಮನೆಯ ತಿಜೋರಿ ಮುರಿದು ನಗ, ನಾಣ್ಯ ದೋಚಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.