ಜನರಿಗಷ್ಟೇ ಬೇಸಿಗೆ ಬಿಸಿಲು ತಟ್ಟುವುದಿಲ್ಲ. ಎತ್ತುಗಳೂ ಇದರ ಪರಿಣಾಮ ಎದುರಿಸುತ್ತವೆ. ಆ ಸಮಯದಲ್ಲಿ ದುಡಿಯುವುದು ಕಷ್ಟಕರ. ಹಾಗಾಗಿ ಮಧ್ಯಾಹ್ನದ ಸಮಯದಲ್ಲಿ ರೈತರು, ಉಳುಮೆಗೆ ಎತ್ತುಗಳನ್ನು ಬಳಸಿಕೊಳ್ಳುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ಕ್ರಮ ಕೊಳ್ಳಲಾಗುವುದು ಎಂದು ಒಳಾಡಳಿತ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಎಚ್ಚರಿಸಿದೆ.