2016ರ ನವೆಂಬರ್ನಲ್ಲಿ ಜಮ್ಮುವಿನ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಏಳು ಅಧಿಕಾರಿಗಳು ಮೃತಪಟ್ಟಿದ್ದರು. ಅದಕ್ಕೂ ಮುನ್ನ ಪಠಾಣ್ಕೋಟ್ ವಾಯುನೆಲೆ ಮೇಲೆ ನಡೆಸಿದ ದಾಳಿಯ ನಂತರ ದೊರಕಿದೆ ಎನ್ನಲಾದ ಚೀಟಿಯಲ್ಲಿ ‘ದೀರ್ಘಕಾಲ ಇರಲಿದೆ ಜೈಷ್–ಇ–ಮಹಮ್ಮದ್, ಕಥುವಾದಿಂದ ರಾಜ್ಬಾಗ್, ರಾಜ್ಬಾಗ್ನಿಂದ ದೆಹಲಿವರೆಗೆ, ಅಫ್ಜಲ್ ಗುರುವಿಗಾಗಿ ಜೀವ ಕೊಡಲು ತಯಾರಿರುವ ಅಫ್ಜಲ್ ಬೆಂಬಲಿಗರನ್ನು ನೀವು ಕಾಣುತ್ತಲೇ ಇರುವಿರಿ’ ಎಂಬ ಹೇಳಿಕೆಗಳು ಇದ್ದವು.