ವಿಜಯಪುರ: ‘ಸಿದ್ದರಾಮಯ್ಯ ಕರೆದರೆ, ಬಿಜೆಪಿ ಸೇರಿ ಸಚಿವರಾದವರು ವಾಪಸು ಬರುತ್ತಾರೆ ಎಂಬ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಹೇಳಿಕೆ ಭ್ರಮೆಯಿಂದ ಕೂಡಿದೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆಳ್ವ ಮಾತು ನಿಜವಿರಲು ಸಾಧ್ಯವಿಲ್ಲ, ಇದು ಭ್ರಮೆ ಮಾತ್ರ’ ಎಂದರು.
‘ಅಮಿತ್ ಶಾ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕು ಸೋನಿಯಾ ಗಾಂಧಿ ಅವರಿಗೆ ಇಲ್ಲ. ಸೋನಿಯಾ ಹಾಗೂ ಅವರ ತಂಡ 70 ವರ್ಷ ಏನು ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೆಂದೇ ಜನರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ’ ಎಂದು ಕುಟುಕಿದರು.