ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಎಚ್.ಹಾಲಪ್ಪ ಅವರು ರಾಮಚಂದ್ರಾಪುರ ಮಠದಿಂದ ನೇಮಕವಾದ ದೇಗುಲದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಅವರಿಗೆ ಕಾಗದ ಪತ್ರಗಳನ್ನು ವಾಪಸ್ ನೀಡಿದರು. ಇದೇವೇಳೆ, ದೇವಸ್ಥಾನಕ್ಕೆ ಸಂಬಂಧಿಸಿದ ಚರ, ಸ್ಥಿರ ಆಸ್ತಿಗಳು, ವಿವಿಧ ಆಭರಣಗಳನ್ನೂ ಮಠಕ್ಕೆ ವರ್ಗಾವಣೆ ಮಾಡಿದರು. ಈ ಮೂಲಕ ಆಡಳಿತದ ಸಂಪೂರ್ಣ ಅಧಿಕಾರವನ್ನು ವರ್ಗಾವಣೆ ಮಾಡಲಾಯಿತು.