ಶುಕ್ರವಾರ ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖ್ಯಸ್ಥ ಬಸವರಾಜ ಸೂಳಿಭಾವಿ ಅವರು, ‘ಗೌರಿ ಹತ್ಯೆಗೆ ಸಂಬಂಧಿಸಿದಂತೆ ಶ್ರೀರಾಮಸೇನೆ, ಆರ್ಎಸ್ಎಸ್, ಸನಾತನ ಸಂಸ್ಥೆ, ಬಿಜೆಪಿ ಪಾತ್ರದ ಕುರಿತೂ ಎಸ್ಐಟಿ ಸಮಗ್ರ ತನಿಖೆ ನಡೆಸಬೇಕು. ಗೌರಿ, ಕಲಬುರ್ಗಿ, ದಾಬೋಲ್ಕರ್, ಪನ್ಸಾರೆ ಹತ್ಯೆಗಳಿಗೆ ಆಂತರಿಕವಾದ ಸಂಬಂಧ ಇದೆ. ಈ ಸಂಘಟನೆಗಳ ಮುಖ್ಯಸ್ಥರನ್ನು ತನಿಖೆಗೆ ಒಳಪಡಿಸಿದರೆ ಉಳಿದ ಹತ್ಯೆಗಳ ಹಿಂದಿನ ಶಕ್ತಿಯೂ ಬಯಲಾಗುತ್ತದೆ’ ಎಂದರು.