‘ಅಜ್ಜನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹುಬ್ಬಳ್ಳಿಯಿಂದ ಬಸ್ನಲ್ಲಿ ಬಂದಿದ್ದ ಆರೋಪಿ, ಫರ್ನಾಂಡಿಸ್ ಒಬ್ಬರೇ ಇದ್ದಾಗ ಹಿಂಬದಿಯಿಂದ ಚಾಕುವಿನಿಂದ ಚುಚ್ಚಿದ್ದ.ಅವರಮೈಮೇಲೆ ಇದ್ದ 50 ಗ್ರಾಂ ಬಂಗಾರವನ್ನು ದೋಚಿಕೊಂಡು ಹೋಗಿ ಅಡವಿಟ್ಟು, ಹಣವನ್ನೂ ಪಡೆದುಕೊಂಡು ಹಿಂತಿರುಗಿದ್ದ. ಫರ್ನಾಂಡಿಸ್ ಅವರ ಮನೆಯ ಸುತ್ತಮುತ್ತಲಿನವರನ್ನು ವಿಚಾರಿಸಿದಾಗ ಜಮೀನು ವ್ಯಾಜ್ಯದ ವಿಷಯ ಗೊತ್ತಾಯಿತು. ಇದರ ಜಾಡು ಹಿಡಿದು ಹೊರಟಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ’ ಎಂದು ತಿಳಿಸಿದರು.