ಬೆಂಗಳೂರು ದಕ್ಷಿಣ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ಅಧಿಕಾರಿಗಳು ಫೆ. 25ರಂದು ನಡೆಸಿದ ತಪಾಸಣೆ ವೇಳೆ ಈ ವಂಚನೆ ಗೊತ್ತಾಗಿದೆ. ಹೊರರಾಜ್ಯಗಳಿಂದ ವರ್ತಕರು ಯಾವುದೇ ದಾಖಲೆಗಳಿಲ್ಲದೆ ಚಿಕ್ಕಪೇಟೆಯಲ್ಲಿರುವ ಸ್ಥಳೀಯ ಆಭರಣ ವರ್ತಕರಿಗೆ ಚಿನ್ನಾಭರಣ ನೀಡುತ್ತಿದ್ದ ವಿಷಯ ಬಯಲಾಗಿದೆ. ಈ ಆಭರಣಗಳಿಗೆ ದಂಡ ವಿಧಿಸ
ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ತಪಾಸಣೆ ಸಂದರ್ಭದಲ್ಲಿ ದಾಖಲೆಗಳಿಲ್ಲದ 3.5 ಕೆ.ಜಿ ಚಿನ್ನಾಭರಣವನ್ನು ಚೀಲವೊಂದರಲ್ಲಿ ತುಂಬಿಸಿದ ಇಬ್ಬರು ಅದನ್ನು ಬೇರೆಡೆಗೆ ಸಾಗಿಸಲು ಯತ್ನಿಸಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಇಬ್ಬರನ್ನು ಕರೆದು ವಿಚಾರಿಸಿದಾಗ ಕೃತ್ಯ ಬಯಲಿಗೆ ಬಂದಿದೆ. ಅದಕ್ಕೂ ದಂಡ
ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.