ದಲಿತರಿಗೆ ಸ್ಥಾನಮಾನ: ‘ದಲಿತರಿಗೆ ಸ್ಥಾನಮಾನ ನೀಡುವ ವಿಚಾರದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಂದ ಕಲಿಯಬೇಕಿಲ್ಲ’ ಎಂದು ರೇವಣ್ಣ ತಿರುಗೇಟು ನೀಡಿದರು. ‘ಮೀಸಲಾತಿ ಇಲ್ಲದಿದ್ದಾಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ವರ್ಗದವರಿಗೆ ನೀಡಿದವರು ದೇವೇಗೌಡರು. ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ, ಮುಸ್ಲಿಮರಿಗೂ ಶೇ 5ರಷ್ಟು ಮೀಸಲಾತಿ ನೀಡಿದ್ದರು. ಸಚಿವರಾದ ತಿಮ್ಮಾಪುರ ಮತ್ತು ಆರ್.ವಿ ದೇಶಪಾಂಡೆ ಅವರನ್ನು ಕೇಳಿ ದೇವೇಗೌಡರು ಮಾಡಬೇಕಿಲ್ಲ’ ಎಂದರು.