ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ತಪ್ಪಿದ್ದಕ್ಕೆ ವಿಶ್ವನಾಥ್‌ ಟೀಕೆ

Last Updated 18 ಜೂನ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶ್ವನಾಥ್‌ ರಾಜಕಾರಣದಲ್ಲಿ ಇರಬಾರದು ಎಂಬ ಮನಸ್ಥಿತಿಯವರಿಂದಾಗಿಯೇ ಟಿಕೆಟ್ ತಪ್ಪಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಷಡ್ಯಂತ್ರ ನಡೆಸಿದ್ದಾರೆ’ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ದೂರಿದರು.

‘ನನಗೂ ಟಿಕೆಟ್‌ ಸಿಗಬೇಕಿತ್ತು. ಕೋರ್‌ ಕಮಿಟಿ ನನ್ನ ಹೆಸರೂ ಸೇರಿ ನಾಲ್ವರ ಹೆಸರುಗಳನ್ನು ಕಳಿಸಿತ್ತು. ಆದರೆ, ದೆಹಲಿಯಿಂದ ಪಟ್ಟಿ ವಾಪಸ್‌ ಬಂದಾಗ ನನ್ನ ಹೆಸರು ಕೈಬಿಡಲಾಗಿದೆ’ಎಂದು ಅವರು ಹೇಳಿದರು.

‘ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಅವರೂ ಕೂಡ ಏನೋ ವ್ಯತ್ಯಾಸವಾಗಿದೆ. ಸರಿಪಡಿಸೋಣ. ಏನಾದರೂ ಮಾಡೋಣ ಎಂಬ ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT