‘ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕನಾಗುವ ಅವಕಾಶ ಕಲ್ಪಿಸಿದ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಚಿರಋಣಿ. ಚುನಾವಣೆ ಬಳಿಕ ಎದುರಾದ ಅಧಿಕಾರದ ಗುದ್ದಾಟದಲ್ಲಿ ನಾನು ಬಲಿಪಶು ಆಗಬೇಕಾಯಿತು. ಸಚಿವ ಸ್ಥಾನ ನೀಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರು. ಅದಕ್ಕೆ ಸ್ಪಂದಿಸಿ, ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಹಾಜರಾಗಿದ್ದೆ. ಆದರೆ, ಕಾಂಗ್ರೆಸ್ ಕೈಗೊಂಬೆಯಾಗಿದ್ದ ಕುಮಾರಸ್ವಾಮಿ, ಸಿದ್ದರಾಮಯ್ಯ ಪಿತೂರಿಗೆ ನನ್ನನ್ನು ಬಲಿಪಶು ಮಾಡಿದರು’ ಎಂದು ಬೇಸರ ಹೊರ ಹಾಕಿದರು.