‘ನಾಗರಾಜ ಬೆಂಗಳೂರಿನಿಂದಹಂಪಿ ನೋಡಲು ಬಂದಿದ್ದರು. ಬುಧವಾರ ಹಂಪಿಯಲ್ಲಿ ಸುತ್ತಾಡುವಾಗ ಸಾಲುಗಂಬವೊಂದನ್ನು ತಳ್ಳಿ ಹಾನಿ ಮಾಡಿದ್ದಾರೆ. ಈ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳು ಠಾಣೆಗೆ ದೂರು ಕೊಟ್ಟಿದ್ದರಿಂದ ನಾಗರಾಜ ಅವನನ್ನು ವಶಕ್ಕೆ ಪಡೆಯಲಾಗಿದೆ. ಸ್ಮಾರಕಗಳ ಮಹತ್ವ ಗೊತ್ತಿಲ್ಲದೆ ನಾಗರಾಜ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದು ಹಂಪಿ ಡಿ.ವೈ.ಎಸ್ಪಿ. ಸಿಮಿ ಮರಿಯಮ್ ಜಾರ್ಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.