ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್.ಐ.) ಕೆಲ ತಿಂಗಳ ಹಿಂದೆ ಬಿಷ್ಟಪ್ಪಯ್ಯ ಗೋಪುರ, ಉಬ್ಬುಶಿಲ್ಪವನ್ನು ಜೀರ್ಣೊದ್ಧಾರಗೊಳಿಸಿತ್ತು. ಅದಕ್ಕಾಗಿ ತಮಿಳುನಾಡಿನ ನುರಿತ ಕಲಾವಿದರನ್ನು ಕರೆಸಿತ್ತು. ಜೀರ್ಣೊದ್ಧಾರಗೊಳಿಸಿದ ನಂತರ ಇಡೀ ದೇಗುಲಕ್ಕೆ ವಿಶೇಷ ಕಳೆ ಬಂದಿತ್ತು. ಆದರೆ, ಉಬ್ಬುಶಿಲ್ಪ ಬಿದ್ದಿರುವುದರಿಂದ ಸಭಾ ಮಂಟಪದ ಮೇಲ್ಭಾಗ ಬಿಕೋ ಎನ್ನುತ್ತಿದೆ.