ಬಳ್ಳಾರಿ: ಹಂಪಿ ಉತ್ಸವದ ದಿನಾಂಕವನ್ನು, ಒಂದೆರಡು ದಿನದೊಳಗೆ ನಿಗದಿ ಪಡಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಲೇಖಕ ಕುಂ. ವೀರಭದ್ರಪ್ಪ ತಿಳಿಸಿದ್ದಾರೆ.
‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಈ ವಿಷಯವನ್ನು ತಿಳಿಸಿದ ಅವರು, ‘ಉತ್ಸವದ ಬಗ್ಗೆ ಖಚಿತ ಅಭಿಪ್ರಾಯ ವ್ಯಕ್ತಪಡಿಸದ ಸರ್ಕಾರವು ಜಿಲ್ಲೆಗೆ ಸಾಂಸ್ಕೃತಿಕ ಅನ್ಯಾಯ ಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.