ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಕೆ.ಪಿ.ನಂಜುಂಡಿ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಸಚಿವರು, ‘ಚಿನ್ನ–ಬೆಳ್ಳಿ ಕೆಲಸಗಾರರ ವಿಚಾರಣೆಗೆ ಹೋಗುವಾಗ ಪೊಲೀಸರು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ಸಾಕ್ಷ್ಯಾಧಾರವಿದ್ದರೆ ಮಾತ್ರ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಅನವಶ್ಯವಾಗಿ ಠಾಣೆಗೆ ಕರೆಸಿಕೊಂಡು ಲಾಕಪ್ನಲ್ಲಿ ಇರಿಸಬಾರದು. ಕಳವಾದ ಸ್ವತ್ತು ವಶಕ್ಕೆ ಪಡೆಯುವಾಗಲೂ ಚಿನ್ನ–ಬೆಳ್ಳಿ ಕೆಲಸಗಾರರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲೇ ಪಂಚ ನಾಮೆ ನಡೆಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ’ ಎಂದರು.