‘ಈಗಾಗಲೇ ವಿವಿಧೆಡೆ 22 ಸಾವಿರ ಕೇಂದ್ರಗಳನ್ನು ತೆರೆಯಲಾಗಿದೆ. ಸ್ವಸ್ಥ ಭಾರತ ಕಟ್ಟುವುದೇ ನಮ್ಮ ಗುರಿ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ನಂಥ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳು ಈ ಕೇಂದ್ರಗಳಲ್ಲಿ ಇರಲಿವೆ. ವಿವಿಧ ರೋಗಗಳ ತಪಾಸಣೆಗೆ ಆದ್ಯತೆ ನೀಡಲಾಗುವುದು. ಚಿಕಿತ್ಸೆ ಮಾತ್ರವಲ್ಲದೇ; ಶಿಕ್ಷಣ ಹಾಗೂ ಜಾಗೃತಿಗೆ ಒತ್ತು ನೀಡಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.