‘ನಾನು ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿದ್ದೆ. ಆದರೆ, ಈಗ ಅಲ್ಲಿಗೆ ಭೇಟಿ ನೀಡಲು ಸಾಧ್ಯವಿಲ್ಲದಷ್ಟು ಅಶಾಂತಿ ನೆಲೆಸಿದೆ. ಗುಜರಾತ್ನಲ್ಲಿ ಹರಿಜನರ ಬಟ್ಟೆಬಿಚ್ಚಿ ಹೊಡೆಯುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರೇಮ ವಿವಾಹ ಮಾಡಿಕೊಂಡರೆ ಹಿಂದೂ– ಮುಸ್ಲಿಂ ದಳ್ಳುರಿ ಉಂಟಾಗುತ್ತದೆ. ಇದು ಹಿಂದೂ ರಾಷ್ಟ್ರ ಎಂದು ಆರ್ಎಸ್ಎಸ್ನವರು ಹೇಳುತ್ತಿದ್ದಾರೆ. ಗಾಂಧಿ, ಅಂಬೇಡ್ಕರ್ ಬದುಕಿದ ನಾಡಿನಲ್ಲಿ ಬಡವರಿಗೆ ಉಳಿಗಾಲವಿಲ್ಲವಾಗಿದೆ’ ಎಂದರು.