ಬೆಂಗಳೂರು: ‘ಉತ್ತರ ಕರ್ನಾಟಕ ಭಾಗಕ್ಕೆನನ್ನ, ಕುಮಾರಸ್ವಾಮಿ ಕೊಡುಗೆ ಹೆಚ್ಚಿದೆ. ಆದರೆ ಅಲ್ಲಿನ ಜನರು ನಮ್ಮ ಪಕ್ಷದ ಮೇಲೆ ಅದ್ಯಾಕೋ ಪ್ರೀತಿ ತೋರಿಸುತ್ತಿಲ್ಲ. ಈ ಬಗ್ಗೆ ನನಗೆ ನೋವಿದೆ’ ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದರು.
ಇಲ್ಲಿ ನಡೆದಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳ ಪಕ್ಷದ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ ಅವರು, ‘ಉತ್ತರದಲ್ಲಿ ಪಕ್ಷಕ್ಕೆ ನೆಲೆ ಇಲ್ಲ. ಆದರೆನಾನು ಸುಮ್ಮನೆ ಕೂರುವುದಿಲ್ಲ. ಅಲ್ಲಿನ ಜನರನ್ನು ನಾನು ಯಾವತ್ತೂ ದೂಷಿಸುವುದಿಲ್ಲ’ ಎಂದರು.
‘ನೆರೆ ಬಂದು ಸಾಕಷ್ಟು ಸಮಸ್ಯೆ ಆಗಿದೆ.ಇದೆಲ್ಲವೂ ಸರಿ ಹೋದ ಮೇಲೆ ಉತ್ತರ ಕರ್ನಾಟಕದಲ್ಲಿ 2-3 ಸಮಾವೇಶ ಮಾಡಲಿದ್ದೇನೆ’ ಎಂದರು.