ಎಚ್.ಡಿ.ಕೋಟೆ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯದ ಒಕ್ಕೂಟ ಮತ್ತು ಅರಣ್ಯ ಹಕ್ಕು ಸಮಿತಿ ಒಕ್ಕೂಟ ನಡೆಸುತ್ತಿರುವ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ.
ವಿವಿಧ ಸಂಘಟನೆಗಳು ಬುಧವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರ ಹೋರಾಟಕ್ಕೆ ಬೆಂಬಲ ನೀಡಿದ್ದವು.
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕ್ಷೀರಸಾಗರ್, ‘ನಿಮ್ಮ ಹಕ್ಕು ನಿಮಗೆ ಸಿಗುವವರೆಗೂ ಹೋರಾಟ ನಿರಂತರವಾಗಿರಲಿ. ನಾವು ನಿಮಗೆ ಬೆಂಬಲವಾಗಿ ನಿಲ್ಲುತ್ತೇವೆ’ ಎಂದು ಭರವಸೆ ನೀಡಿದರು.
‘ಕಣ್ಣು ಮತ್ತು ಕಿವಿ ಇಲ್ಲದ ಸರ್ಕಾರಗಳಿಗೆ ಜನರ ನೋವು ಅರ್ಥವಾಗುವುದಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಎಲ್ಲ ಸಂಘಟನೆಗಳ ಬೆಂಬಲ ಪಡೆದು ಉಗ್ರ ಹೋರಾಟ ನಡೆಸಲಾಗುವುದು’ ಎಂದು ಜೀವಿಕ ಸಂಘಟನೆಯ ಬಸವರಾಜು ಎಚ್ಚರಿಕೆ ನೀಡಿದರು.
ಉಮೇಶ್, ಶಿವರಾಜು, ಬಸವರಾಜು, ಮಹದೇವ್, ಬಿ. ಕಾವೇರ, ಶೈಲೇಂದ್ರ. ಪುಟ್ಟಬಸವ. ಜಯರಾಜು. ಸಿದ್ದರಾಜು. ಗಂಗಮ್ಮ. ಸೋಮಮ್ಮ, ಪೊನ್ನಮ್ಮ, ಸೋಮಮ್ಮ, ಗಂಗೆ ಸೇರಿದಂತೆ ಡಿ.ಬಿ.ಕುಪ್ಪೆ ಹಾಗೂ ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅರಣ್ಯದೊಳಗಿನ ಹಾಡಿಗಳ ವಾಸಿಗಳುಇದ್ದರು.