ಬೆಂಗಳೂರು:ಸಾಲ ಮರುಪಾವತಿ ಮಾಡುವಂತೆ ಮುಂಡರಗಿ ತಾಲೂಕಿನ ಇಬ್ಬರಿಗೆ ನೀಡಿದ್ದ ನೋಟಿಸ್ಅನ್ನುಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಧ್ಯಪ್ರವೇಶದಿಂದಬ್ಯಾಂಕ್ ಹಿಂಪಡೆದಿದೆ.
ಮುಂಡರಗಿ ತಾಲ್ಲೂಕು ಹೆಸರೂರು ಗ್ರಾಮದ ಶರಣಪ್ಪ ವೀರಪ್ಪ ಚನ್ನಾಲಿ ಮತ್ತು ಚನ್ನಬಸವ್ವ ವೀರಪ್ಪ ಚನ್ನಾಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಡೆದಿದ್ದ ಸಾಲವು ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬಾರದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು.
ಸದ್ಯಮುಖ್ಯಮಂತ್ರಿಗಳ ಮಧ್ಯಪ್ರವೇಶದಿಂದಾಗಿನೋಟಿಸ್ ಹಿಂಪಡೆದಿರುವಬ್ಯಾಂಕ್,ಋಣ ಸಮಾಧಾನ ಯೋಜನೆಯಡಿಯಲ್ಲಿ ಬಾಕಿ ಉಳಿದ ಮೊತ್ತಕ್ಕೆ ಶೇ. 50ರ ರಿಯಾಯಿತಿಯೊಂದಿಗೆ ಮರುಪಾವತಿ ಮಾಡಲು ಅವಕಾಶ ಕಲ್ಪಿಸಿದೆ.