‘ಬಿಜೆಪಿ ರಾಜ್ಯಾಧ್ಯಕ್ಷರು ನಾವು ಬಿಜೆಪಿ ಶಾಸಕರಿಗೆ ಆಮಿಷ ಒಡ್ಡುತ್ತಿದ್ದೇವೆ ಎಂದು ಹೇಳುತ್ತಿರುವುದು ಆಶ್ಚರ್ಯಕರ. ನಾವು ಹೊಸ ವರ್ಷದಲ್ಲಿ ನಾನು ಕುಟುಂಬದ ಜೊತೆ ಬೇರೆ ಕಡೆ ಹೋಗಿದ್ದನ್ನು ಯಡಿಯೂರಪ್ಪ ದೊಡ್ಡ ಇಶ್ಯೂ ಮಾಡಿದರು. ಅವತ್ತು ನನ್ನ ಮೇಲೆ ಟೀಕೆ ಮಾಡಿದ ಯಡಿಯೂರಪ್ಪಗೆ ಕೇಳುತ್ತೇನೆ, ‘ಯಾವ ಪುರುಷಾರ್ಥ ಸಾಧನೆಗೆ ಗುರುಗ್ರಾಮದಲ್ಲಿ ಅವರ ಶಾಸಕರನ್ನು ಕೂಡಿ ಹಾಕಿದ್ದಾರೆ?, ಗುರುಗ್ರಾಮದಲ್ಲಿ ಹೋಟೆಲ್ನಲ್ಲಿ ಕೂತು ಬಿಜೆಪಿ ಶಾಸಕರು ಬರ ವೀಕ್ಷಣೆ ಮಾಡ್ತಿದ್ದಾರಾ?, ನಾನು ಎರಡು ದಿನ ಹೊರಗೆ ಹೋಗಿದ್ದಕ್ಕೆ ಚಾರ್ಜ್ ಮಾಡಿದ ಯಡಿಯೂರಪ್ಪ ಇದಕ್ಕೇನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.