ಬೆಂಗಳೂರು: ರೈತರು ಒಡವೆ ಅಡವಿಟ್ಟುಬೆಳೆ ಸಾಲ ಪಡೆದಿದ್ದು, ಈ ಸಾಲದ ಬಡ್ಡಿ ಮೇಲಿನ ಸಬ್ಸಿಡಿಯನ್ನು ಬ್ಯಾಂಕ್ಗಳಿಗೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಾಲಗಳ ಬಡ್ಡಿ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಿದ್ದು, ಲೇವಾದೇವಿದಾರರಿಗೆ ರೈತರು ಶರಣಾಗುವಂತೆ ಮಾಡಿದೆ. ಮತ್ತೊಂದೆಡೆ ಬ್ಯಾಂಕ್ಗಳಲ್ಲಿರುವ ಬಡವರ ಚಿನ್ನವನ್ನು ಹರಾಜಿನಮೂಲಕ ಕೇಂದ್ರ ಲಪಟಾಯಿಸುತ್ತಿದೆ ಎಂದು ಟ್ವಿಟ್ಮಾಡಿ ಆರೋಪಿಸಿದ್ದಾರೆ.
ಸಬ್ಸಿಡಿಯನ್ನು ಕೇಂದ್ರ ನೀಡದಿದ್ದರೆ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.