ಈ ಕುರಿತು ಜೈಪಾಲ್ ರೆಡ್ಡಿ ಅವರನ್ನು ವಿಚಾರಿಸಿದರೆ, ‘ಗೌರಿಬಿದನೂರು ತಾಲ್ಲೂಕಿನ ಜನರು ನನ್ನ ಮೇಲೆ ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ. ಅವರ ಋಣ ತೀರಿಸಿಕೊಳ್ಳಲು ನಾನು ಸಮಾಜ ಸೇವೆ ಮಾಡುತ್ತಿರುವೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಪೊಲೀಸರ ಮೂಲಕ ಅಡ್ಡಿಪಡಿ ಸುತ್ತಿದ್ದಾರೆ. ಸಂವಿಧಾನಾ ತ್ಮಕವಾಗಿ ಇದು ಸರಿಯಲ್ಲ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡಲಿದ್ದಾರೆ’ ಎಂದು ಅವರು ಹೇಳಿದರು.