‘ಒಡಿಸಾದಲ್ಲಿ ಚುನಾವಣೆ ಇದೆ. ಹೀಗಾಗಿ, ಕೇಂದ್ರ ಸರ್ಕಾರ ಅಲ್ಲಿಗೆ ಈಗಾಗಲೇ ₹ 1ಸಾವಿರ ಕೋಟಿ ಕೊಟ್ಟಿದೆ. ಮತ್ತೆ ₹ 3ಸಾವಿರ ಕೋಟಿ ಘೋಷಿಸಿದ್ದಾರೆ. ಕರ್ನಾಟಕಕ್ಕೆ ಸದ್ಯ ಕನಿಷ್ಠ ₹ 10ಸಾವಿರ ಕೋಟಿಯನ್ನಾದರೂ ಕೊಡಬೇಕು. ಸರ್ವ ಪಕ್ಷಗಳ ಸಭೆ ಕರೆದು, ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಬೇಕು. ರೈತರು ಬೆಳೆ ಬೆಳೆಯಲು ಮಾಡಿದ ಎಲ್ಲ ಖರ್ಚನ್ನೂ ಕೊಡಬೇಕು. ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡಬೇಕು. ಅಲ್ಲಿವರೆಗೆ ಅವರ ಜೀವನ ನಿರ್ವಹಣೆ ತಗಲುವ ವೆಚ್ಚ ಕೊಡಬೇಕು’ ಎಂದು ಒತ್ತಾಯಿಸಿದರು.