ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ಆ ಕಾರ್ಯಕ್ರಮದಲ್ಲಿ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಸರಿ–ತಪ್ಪುಗಳ ಕುರಿತು ಚರ್ಚಿಸಲು ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ಚುನಾವಣೆ ಸಂದರ್ಭದಲ್ಲಿ ನೀಡಿದ ‘ಫ್ರೆಂಡ್ಲಿ ಫೈಟ್’ ಸಲಹೆ ತಿರಸ್ಕರಿಸಿ, ದೋಸ್ತಿ ಮಾಡಿಕೊಂಡವರು ಅವರು. ಮೈತ್ರಿ ಈಗ ಮುಗಿದ ಅಧ್ಯಾಯ. ಅದರ ಬಗ್ಗೆ ಈಗ ಏಕೆ ಮಾತನಾಡಬೇಕಿತ್ತು?’ ಎಂದು ಕಿಡಿಕಾರಿದರು.