‘ನೀರಾವರಿ ನಿಗಮದ ಮೂಲಕ 2007-08ರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಗುತ್ತಿಗೆ ನೀಡಲಾಗಿತ್ತು. ಯಡಿಯೂರಪ್ಪ ಆ ಅವಧಿಯಲ್ಲಿ ಈ ನಿಗಮದ ಅಧ್ಯಕ್ಷರೂ ಆಗಿದ್ದರು.
₹ 1,033 ಕೋಟಿಗೆ ಮುರುಡೇಶ್ವರ ಕಾರ್ಪೊರೇಷನ್ ಲಿಮಿಟೆಡ್ಗೆ ಗುತ್ತಿಗೆ ನೀಡಿತ್ತು. ಅದರ ಸಹವರ್ತಿ ಆರ್ಎನ್ಎಸ್ಐಎಲ್ ಕಂಪನಿಯಿಂದ ಯಡಿಯೂರಪ್ಪ ₹1 ಕೋಟಿ ಲಂಚ ಪಡೆದಿದ್ದಾರೆ. 2009-10 ಮತ್ತು 2010-11ರಲ್ಲಿ ತಲಾ ₹1 ಕೋಟಿ, 2011-12ರಲ್ಲಿ ₹ 2 ಕೋಟಿ ಲಂಚ ತೆಗೆದುಕೊಂಡಿರುವುದು ಆದಾಯ ತೆರಿಗೆ ಇಲಾಖೆಯ ದಾಖಲೆ ತೋರಿಸುತ್ತದೆ’ ಎಂದು ಆರೋಪಿಸಿದ ಉಗ್ರಪ್ಪ ಈ ಕುರಿತಾದ ದಾಖಲೆಗಳನ್ನು ಪ್ರದರ್ಶಿಸಿದರು.