ಉಳಿದಂತೆ ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರುಗಳನ್ನು ಪ್ರಕಟಿಸಿದ್ದು, ಕೆಳಗಡೆ ಮತದಾನ ಜಾಗೃತಿಯ ಜೊತೆಗೆ, ‘ಜೀವ ಉಳಿಸಲು ರಕ್ತದಾನ’, ‘ದೇಶ ಕಟ್ಟಲು ಮತದಾನ’, ‘ಮತದಾನ ಮಹಾದಾನ’, ‘ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಾರಣ’ ಹಾಗೂ ‘ಮತ ಮಾರಿಕೊಳ್ಳುವ ಹೇಡಿಗಳು ನಾವಲ್ಲ, ಮತವೆಂಬ ಅಸ್ತ್ರ ಬಳಿ ಪ್ರಾಮಾಣಿಕರನ್ನು ಆರಿಸುವ ಪ್ರಬುದ್ಧರು ನಾವು’ ಎಂಬ ಮತದಾರರ ಜಾಗೃತಿ ಸಂದೇಶಗಳನ್ನೂ ಮುದ್ರಿಸಿದ್ದಾರೆ.