ಡಯಾಲಿಸಿಸ್ ಪಡೆಯುತ್ತಿರುವ ಚಂದ್ರು ಎಂಬುವವರು ಪ್ರತಿಕ್ರಿಯಿಸಿ, ‘ಮೊನ್ನೆಯಷ್ಟೇ ಆಸ್ಪತ್ರೆಯಿಂದ ನರ್ಸ್ ಒಬ್ಬರು ಕರೆ ಮಾಡಿ ನಿಮ್ಮಲ್ಲಿ ಹೆಪಟೈಟಿಸ್ ಸೋಂಕು ಪತ್ತೆಯಾಗಿದೆ. ಇನ್ನು ಮುಂದೆ ನಿಮಗೆ ಇಲ್ಲಿ ಡಯಾಲಿಸಿಸ್ ಮಾಡಲಾಗದು ಎಂದು ತಿಳಿಸಿದರು. ಇದರ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಸರ್ಕಾರ ಇದರ ಜವಾಬ್ದಾರಿ ಹೊರಬೇಕು. ಇಲ್ಲದಿದ್ದರೆ, ನಾವು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ’ ಎಂದರು.