ಅಂತೆಯೇ ಮತ್ತೊಬ್ಬ ಹಿರಿಯ ವಕೀಲ ಎನ್.ಲಕ್ಷ್ಮೀ ನಾರಾಯಣ ಅವರೂ ವಿಜಯಶಂಕರ್ ಪರ ವಾದ ಮಂಡಿಸಿ, ‘ಕಂಪನಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ಕೇರಳ, ದುಬೈ, ಚೆನ್ನೈ ಮುಂತಾದ ಹೊರ ರಾಜ್ಯಗಳ ಹೂಡಿಕೆದಾರರು ತಮ್ಮ ಹಣ ತೊಡಗಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸುವುದು ಸೂಕ್ತವಲ್ಲ. ವಿಜಯಶಂಕರ್ ನೀಡಿರುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು. ಕೇಂದ್ರ ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು’ ಎಂದರು.