ದುಬಾರಿ ವಾಚ್ ಕಟ್ಟಿದ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ‘ಹ್ಯೂಬ್ಲೋಟಯ್ಯ’ ಎಂದೋ, ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸಿಲುಕಿ ಜಾಮೀನು ಪಡೆ
ದಿರುವ ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರನ್ನು ‘ಬೇಲ್ಗಾಂಧಿ’, ‘ಬೇಲಮ್ಮ’ ಎಂದೋ ಕರೆಯುವುದು ಸನ್ನಡತೆ ಆಗುತ್ತದೆಯೇ? ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜಕಾರಣಿಗಳು ಇಂಥ ದ್ವೇಷಾಸೂಯೆಯ ಮಾತುಗಳನ್ನು ಬಿಟ್ಟು, ಸಜ್ಜನಿಕೆಯನ್ನು ಪ್ರದರ್ಶಿಸಿ ‘ಕರ್ನಾಟಕದ ಮಾನ’ಕ್ಕೆ ಎರವಾಗದಂತೆ ನಡೆದುಕೊಳ್ಳಬೇಕು.