ಬೇಷರತ್ ಬಾಂಬ್ ದಾಳಿ ನಿಲುಗಡೆಗೆ ಉ ಥಾಂಟ್ ಕರೆ
ವಿಶ್ವಸಂಸ್ಥೆ, ಮೇ 14– ವಿಯಟ್ನಾಂ ಶಾಂತಿ ಸಂಧಾನಗಳಿಗಾಗಿ ಯೋಗ್ಯ ವಾತಾವರಣ ಸೃಷ್ಟಿಸಲು ಉತ್ತರ ವಿಯಟ್ನಾಂ ವಿರುದ್ಧ ಬಾಂಬ್ ದಾಳಿಯ ಬೇಷರತ್ ನಿಲುಗಡೆ ಪ್ರಪ್ರಥಮ ಅವಶ್ಯಕತೆಯೆಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟರು ಇಂದು ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.