‘ನಮ್ಮಲ್ಲಿ 90 ಸಾವಿರದಷ್ಟು ಮಂದಿ ಪದವೀಧರ ಶಿಕ್ಷಕರೇ ಇದ್ದಾರೆ.ಹೆಚ್ಚಿನವರು ಸಂಬಳವನ್ನೂ ಬಿಟ್ಟುಕೊಟ್ಟು ಪದವಿ/ ಸ್ನಾತಕೋತ್ತರ ಪದವಿ, ಪಿಎಚ್ಡಿ ಗಳಿಸಿದ್ದಾರೆ.ಪದವೀಧರ ಶಿಕ್ಷಕರನ್ನಾಗಿ ನೇಮಕ ಮಾಡುವುದಿದ್ದರೆ ಮೊದಲಿಗೆ ನಮಗೆ ಅವಕಾಶ ಕೊಡಿ, ಹೆಚ್ಚುವರಿ ಹುದ್ದೆ ಉಳಿದರಷ್ಟೇ ಇತರರಿಗೆ ಅವಕಾಶ ಕಲ್ಪಿಸಿ ಎಂದು ಸರ್ಕಾರವನ್ನು ಪದೇ ಪದೇ ಕೇಳುತ್ತಲೇ ಇದ್ದೇವೆ. ಸರ್ಕಾರ ಈ ಮನವಿಗೆ ಸೊಪ್ಪು ಹಾಕದಿದ್ದರೆ ನಮ್ಮ ಹೋರಾಟ ತೀವ್ರಗೊಳಿಸುವುದು ನಿಶ್ಚಿತ’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿ ಹೇಮಂತ್ ‘ಪ್ರಜಾವಾಣಿ’ಗೆ ತಿಳಿಸಿದರು.