ಬೆಂಗಳೂರು:ಕನಕದಾಸ ಜಯಂತಿ ಪ್ರಯುಕ್ತ ಇರುವ ರಜೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದಿಲ್ಲ. ಕನಕ ಜಯಂತಿ ಆಚರಣೆ ಮಾಡಲಾಗುವುದು. ಆ ದಿನ ಸರ್ಕಾರಿ ರಜೆ ಇದೆ ಎಂದುಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
‘ಇದೇ 15ರಂದು ಕನಕ ಜಯಂತಿ ಆಚರಿಸಲಾಗುವುದು. ರಜೆ ಬಗ್ಗೆ ಯಾವುದೇ ಖಾಸಗಿ ಸಂಸ್ಥೆಗಳು/ ಶಿಕ್ಷಣ ಸಂಸ್ಥೆಗಳು ಬೇರೆ ನಿರ್ಧಾರ ಕೈಗೊಂಡಿದ್ದರೆ, ಅದು ಆಯಾ ಸಂಸ್ಥೆಯ ನಿರ್ಧಾರವಾಗಿರುತ್ತದೆ. ಈ ಸಂಬಂಧ ಸರ್ಕಾರ ಯಾವುದೇ ಆದೇಶ ಅಥವಾ ಸೂಚನೆ ಹೊರಡಿಸಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.