ಅತ್ಯಂತ ಖಾಸಗಿಯಾಗಿ ನಡೆದ ಈ ಹೋಮದಿಂದ ಆಪ್ತ ಸಚಿವರು, ಶಾಸಕರು, ಕಾರ್ಯದರ್ಶಿಗಳನ್ನುಸಹ ದೂರ ಇಡಲಾಗಿತ್ತು. ಮುಖ್ಯವಾಗಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿಗೆ ವಿಜಯ ದೊರಕಲು ಪ್ರಮುಖ ಕಾರಣವಾಗಿರುವ ಪುತ್ರ ವಿಜಯೇಂದ್ರನಿಗೆ ಎದುರಾಗಿರಬಹುದಾದ ಶತ್ರು ಕಾಟವನ್ನು ನಿವಾರಿಸುವುದು ಸಹ ಸುದರ್ಶನ ಹೋಮ ನಡೆಸಿದ್ದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.