‘ಬೆಳಗಾವಿಯ ಸಂಸದರು ಗಡಿ ವಿಚಾರದಲ್ಲಿ ಮಾತನಾಡುವುದಿಲ್ಲ. ಅದರಲ್ಲಿ ಅವರ ಸ್ವಾರ್ಥವಿದೆ. ಲಾಭಕ್ಕೆ ತೊಂದರೆಯಾಗುತ್ತದೆ ಎನ್ನುವುದು ಅವರ ಉದ್ದೇಶವಾಗಿದೆ. ಮಹದಾಯಿ ನದಿ ವಿವಾದವಿರಲಿ, ಗಡಿ ವಿವಾದವಿರಲಿ ಎಲ್ಲರೂ ರಾಜ್ಯದ ಹಿತ ಕಾಯಬೇಕು. ರಾಜ್ಯ ಸರ್ಕಾರವು ಇಬ್ಬರು ಸಚಿವರನ್ನು ನೇಮಿಸಿ ಗಡಿ ರಕ್ಷಣೆಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.